ಐಡೆಫೀ ಹಲವಾರು ವರದಿಗಳಲ್ಲಿ ಹೇಳುತ್ತಿದ್ದಂತೆ, (ಇಲ್ಲಿ ಓದಿ) ಕಾಂಗ್ರೆಸ್ ಪಕ್ಷವು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಕೆಡಿಸುವ ತಂತ್ರಗಾರಿಕೆಯಲ್ಲಿ ತೊಡಗಿದ್ದು, ಇದಕ್ಕಾಗಿಯೇ ಟೂಲ್ ಕಿಟ್ ಒಂದನ್ನು ಸಿದ್ಧಪಡಿಸಿದೆ. ಇದರಲ್ಲಿ, ಯಾವ ವಿಷಯದಲ್ಲಿ ನರೇಂದ್ರ ಮೋದಿ ಮೇಲೆ ಹೇಗೆ ಅಪಪ್ರಚಾರ ನಡೆಸಬೇಕೆಂಬ ಬಗ್ಗೆ ಪಟ್ಟಿಯನ್ನೇ ಮಾಡಲಾಗಿದೆ ಎಂದು ಬಿಜೆಪಿ ಮುಖಂಡರಾದ ಸಂಬಿತ್ ಪಾತ್ರಾ ಹಾಗೂ ಬಿ.ಎಲ್.ಸಂತೋಷ್ ಅವರು ದಾಖಲೆಗಳ ಸಮೇತ ಬಯಲು ಮಾಡಿದ್ದಾರೆ.
ಕಾಂಗ್ರೆಸ್ನ ಈ ಕುತಂತ್ರದ ವಿರುದ್ಧ ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ ಕೂಡ ಕಿಡಿ ಕಾರಿದ್ದಾರೆ.
- ಇವನ್ನೂ ಓದಿ: ಕೊರೊನಾ ಸಾವಿನ ಸಂಖ್ಯೆ ಹೆಚ್ಚಳಕ್ಕೆ ‘ಲಸಿಕೆ ಬಗ್ಗೆ ಭೀತಿ ಬಿತ್ತಿದ ಕಾಂಗ್ರೆಸ್ ಕಾರಣ’ ಅಂತ ಹೇಳಿದ್ದೇಕೆ ಬಿಜೆಪಿ?
- ಕೋವಿಡ್ ನಿಯಂತ್ರಣಕ್ಕೆ ನರೇಂದ್ರ ಮೋದಿ ಏನೂ ಮಾಡಿಲ್ಲವೇ?: ಇಲ್ಲಿದೆ ಪ್ರಶ್ನೆಗಳಿಗೆ ಉತ್ತರ
- ಕೋವಿಡ್ ಅಪಪ್ರಚಾರ ನಿಲ್ಲಿಸಿ: ಸೋನಿಯಾಗೆ ಬಿಜೆಪಿಯ ನಡ್ಡಾ ನೇರ ತಿರುಗೇಟು
- ಕೊರೊನಾ ವೈರಸ್ ಎಂಬ ಜೈವಿಕ ಅಸ್ತ್ರ?: ಚೀನಾದ ದುಷ್ಟತನಕ್ಕೆ ಸಾಕ್ಷಿ ಸಿಕ್ತು!
- ಮೋದಿ ವಿರೋಧಿಗಳು ಓದಲೇಬೇಕು: 140 ಕೋಟಿ ಮಂದಿಯನ್ನು ಮೋದಿ ರಕ್ಷಿಸಿದ್ದು ಹೀಗೆ!
- ಭಾರತದ ವಿರುದ್ಧದ ಅಂತರರಾಷ್ಟ್ರೀಯ ಸಂಚು ಬೆಳಕಿಗೆ ತಂದ ಟೂಲ್ ಕಿಟ್ನಲ್ಲಿ ಏನಿತ್ತು, ಗೊತ್ತೇ?
ಸ್ಮೃತಿ ಇರಾನಿ ಅವರಂತೂ ರಾಹುಲ್ ಗಾಂಧಿಯನ್ನು ಹಿಗ್ಗಾ ಮುಗ್ಗಾ ಟೀಕಿಸಿದ್ದಾರೆ.
ಓಂ ಪ್ರಕಾಶ್ ಧನ್ಕರ್ ಅವರಂತೂ, ಹಿಂದುತ್ವಕ್ಕೆ ಕಳಂಕ ತರುವ ಕಾಂಗ್ರೆಸ್ ಪ್ರಯತ್ನದ ವಿರುದ್ಧ ಕಿಡಿ ಕಾರಿದ್ದಾರೆ.
ಇಡೀ ದೇಶವೇ ಸಂಕಷ್ಟದಲ್ಲಿ ಸಿಲುಕಿರುವಾಗ ಕಾಂಗ್ರೆಸ್ ಪಕ್ಷವು ಟೂಲ್ ಕಿಟ್ ತಯಾರಿಸಿ, ಫೇಕ್ ಸುದ್ದಿ ಹರಡುವ ಪ್ರಯತ್ನ ನಡೆಸುತ್ತಿದೆ ಎಂದು ಟೀಕಿಸಿದ್ದಾರೆ ಬಿಜೆಪಿ ಮುಖಂಡ ಬಿ.ಎಲ್.ಸಂತೋಷ್.
ಕಾಂಗ್ರೆಸ್ ಪಕ್ಷವು ಪಾರದರ್ಶಕವಾಗಿರುವ ಪಿಎಂ ಕೇರ್ಸ್ ನಿಧಿ ಬಗ್ಗೆ ಸಂದೇಹ ವ್ಯಕ್ತಪಡಿಸಿತು, ವಿಜ್ಞಾನಿಗಳ ಸಾಧನೆಯನ್ನು ಸಂದೇಹಿಸಿತು, ಲಸಿಕೆ ತಯಾರಿಸಲು ಹಿಂಜರಿಕೆ ಸೃಷ್ಟಿ ಮಾಡಿತು, ವೆಂಟಿಲೇಟರ್ ವಿವಾದ, ಇನ್ನೂ ಏನೇನನ್ನೋ ಹುಟ್ಟು ಹಾಕಿತು. ಈ ದುಸ್ಸಾಹಸಕ್ಕೆ ಇತಿಹಾಸವೆಂದಿಗೂ ಕ್ಷಮಿಸುವುದಿಲ್ಲ ಎಂದಿದ್ದಾರೆ ಸಂತೋಷ್.
ಇದೀಗ ಬಿಜೆಪಿ ಬಯಲಿಗೆಳೆದ ಟೂಲ್ ಕಿಟ್ ಹಗರಣದ ಬಗ್ಗೆ ಕಾಂಗ್ರೆಸ್ ಕೆರಳಿ ಕೆಂಡವಾಗಿದೆ. ಇದು ಸುಳ್ಳು ಸುದ್ದಿ ಎಂದು ಹೇಳುತ್ತಾ, ಬಿಜೆಪಿ ಮುಖಂಡರ ವಿರುದ್ಧ ಕೇಸು ದಾಖಲಿಸುವುದಾಗಿ ಎಚ್ಚರಿಕೆ ನೀಡಿದೆ.

Average Rating