ರಕ್ಷಾ ಬಂಧನ ಸಮೀಪಿಸುತ್ತಿರುವಂತೆಯೇ, ಕರ್ನಾಟಕ ಅಂಚೆ ಇಲಾಖೆಯು ಆನ್ಲೈನ್ ‘ರಾಖಿ ಅಂಚೆ’ ಸೇವೆ ಆರಂಭಿಸಿದೆ.
ಕೇವಲ ರೂ. 100 ವೆಚ್ಚದಲ್ಲಿ ಜನರು ಆನ್ಲೈನ್ ಮೂಲಕವೇ ರಾಖಿಯನ್ನು ಬುಕ್ ಮಾಡಬಹುದು ಎಂದಿದ್ದಾರೆ ಮಂಗಳೂರು ವಲಯ ಅಂಚೆ ವಿಭಾಗದ ಹಿರಿಯ ಸೂಪರಿಂಟೆಂಡೆಂಟ್ ಆಗಿರುವ ಎನ್. ಶ್ರೀಹರ್ಷ.
ಇಷ್ಟೇ ಅಲ್ಲದೆ, ದೇಶ ಕಾಯುವ ಸೈನಿಕರಿಗೆ ಕೂಡ ಜನರು ರಾಖಿಯನ್ನು ಕಳುಹಿಸಬಹುದಾಗಿದೆ. ಭ್ರಾತೃತ್ವದ ಸಂಕೇತವಾಗಿರುವ ಈ ರಾಖಿಯನ್ನು ಸೈನಿಕರಿಗೆ ಕಳುಹಿಸುವ ಮೂಲಕ, ನಮ್ಮನ್ನು ಶತ್ರುವಿನಿಂದ ಸದಾ ರಕ್ಷಿಸುತ್ತಿರುವ ವೀರ ಯೋಧರನ್ನು ನಮ್ಮದೇ ಕುಟುಂಬದ ಸಹೋದರರೆಂದು ಪರಿಗಣಿಸಿ, ಅವರಿಗೆ ಗೌರವಪೂರ್ವಕವಾಗಿಯೂ ರಾಖಿಗಳನ್ನು ಕಳುಹಿಸಬಹುದಾಗಿದೆ.

Average Rating